ನೃತ್ಯೋತ್ಸವ :- ರಂಗಪ್ರವೇಶ
ಭಾರತೀಯ
ಸಾ೦ಸ್ಕ್ರುತಿಕ ಲಾಂಛನವೇ ನೃತ್ಯ,
ಭಾವ
ರಾಗ, ತಾಳದ ಉತ್ಕರ್ಷವೇ ನೃತ್ಯ, ಶೃಂಗಾರ
ಭಾವವೇ ಪ್ರಮುಖ ನೃತ್ಯದಲ್ಲಿ.
ಭಾರತೀಯ
ವಿದ್ಯಾಭವನದಲ್ಲಿ ಕಳೆದ ಭಾನುವಾರ ಸಂಜೆ 6-30 ಕ್ಕೆ ಕುಮಾರಿ ಶ್ವೇತಾರ ಭರತನಾಟ್ಯದ
ರಂಗಪ್ರವೇಶಕ್ಕೆ ನಾಂದಿಯಾಯಿತು, ಕಲಾವಿದೆ
18
ವರ್ಷಗಳಿ೦ದ ವಿದ್ವಾನ್ ನಾಗಭೂಷಣ್ ರವರ ಬಳಿ ಶಿಷ್ಯ ವೃತ್ತಿಯಲ್ಲಿ ಪಯಣ.
ಮೊದಲಿಗೆ
ಗಣೇಶ ಸ್ತುತಿಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರಕಿತು, ಇದು
ನಾಗಭೂಷಣ್ ರ ಕಂಠಸಿರಿಯಲ್ಲಿ ಮೂಡಿಬಂದಿತು, ಪುಷ್ಪಾಂಜಲಿಯೊಂದಿಗೆ ಕಾರ್ಯಕ್ರಮ ಆರಂಭ.
ನರ್ತಕಿ ಪುಷ್ಪಗಳೊಂದಿಗೆ ನೃತ್ಯದೇವತೆಯಾದ ನಟರಾಜನಿಗೆ ಪುಷ್ಪಗಳನ್ನು ಅರ್ಪಿಸಿ, ವಿದ್ಯಾ
ಸರಸ್ಪತಿಯಾದ ಶಾರದೆಗೆ ನಮಿಸಿ, ಸಭಿಕರ
ಆಶೀರ್ವಾದವನ್ನು ಬೇಡುತ್ತಾ, ಕಲಾ
ವಿದ್ವಾಂಸರಿಗೆ ಪೂಜಿಸಿ, ನೃತ್ಯವನ್ನು ಆರಂಭಿಸಿದಳು. ಅದು ರಾಗ-ನಾಟ, ಏಕತಾಳಕ್ಕೆ
ಬಂದಿತವಾಗಿತ್ತು. ಆರಂಭಿಕ ನೃತ್ಯವೂ ಮನ
ಸೆಳೆಯಿತು,
ಗಣಪತಿಯ
ತಂದೆಯ ಸರದಿ , ದೇವರ ದೇವ ಮಹಾದೇವ, ಓಂ
ಶಿವ ಶಂಭೋ, ಸ್ವಯಂಭೊ, ಅದರ
ತಾಳಕ್ಕೆ ಹೆಜ್ಜೆಯ ಗೆಜ್ಜೆಯ ಸಪ್ಪಳ ಜರುಗಿತು, ಇದು ರಾಗ ರೇವತಿ – ಆದಿತಾಳದಲ್ಲಿತ್ತು.
ನೃತ, ನಾಟ್ಯ
ಭಾವ, ರಾಗ, ತಾಳದ ಸಮ್ಮಿಶ್ರಣವೇ ವರ್ಣ, ಇಲ್ಲಿ ಕಲಾವಿದೆ
ಶೃಂಗಾರದೊಂದಿಗೆ ಅಧ್ಬುತವಾದಂಥಹ ಪ್ರತಿಭೆಯನ್ನು ತೋರಿದಳು. ಇದು-
ಧರ್ಮಾವತಿ ರಾಗದಲ್ಲಿದ್ದು, ಆದಿತಾಳಕ್ಕೆ
ಬಂದಿತವಾಗಿದೆ. ವರ್ಣದಲ್ಲಿ ಮತ್ತಷ್ಟು ಅಭಿನಯಕ್ಕೆ ಪ್ರಾಮುಖ್ಯತೆಯನ್ನ ನೀಡಬಹುದಿತ್ತು.
ಬಹು
ಪ್ರಸಿದ್ದವಾದ ದೇವರನಾಮ, ಆಡಿದನೋ ರಂಗ, ರಾಗ-ಆರಬಿ, ಆದಿತಾಳದಲ್ಲಿದ್ದು, ಕೃತಿಗೆ
ಹೆಜ್ಜೆಯ ನಾದ ಬೆರೆತಿತ್ತು,
ಇದು
ಪುರಂದರ ದಾಸರ ಕೃತಿ ಕಲಾವಿದೆ ಉತ್ತಾರಾರ್ಧದಲ್ಲಿ ಅಭಿನಯ, ಅ೦ಗಿಕ ಭಾವನೆ ತು೦ಬಾ ಚೆ೦ದವಾಗಿತ್ತು.
ಕೀರ್ತನ
: ನಾಟ್ಯದೇವತೆಯಾದ ನಟರಾಜನ ಕುರಿತಾದ “ ನಟನಂ ಹಾಡಿದ” ಎಂಬ ಪದಗಳಿಗೆ ಬಹಳ ವಿಶೇಷವಾದ ಕೃತಿಗೆ
ಹೆಜ್ಜೆಯ ಗೆಜ್ಜೆಯ ನಾದ ವಿಶಿಷ್ಟವಾಗಿತ್ತು,
ತಿಲ್ಲಾನ
: ಭರತನಾಟ್ಯದ ಕೊನೆಯ ಭಾಗವೇ ತಿಲ್ಲಾನ. ಎಲ್ಲ
ನೃತ್ಯಗಳಿಗೆ ಕಲಶಪ್ರಾಯವಾದ ತಿಲ್ಲಾನದ ಜೀವಾಳವೇ ಲವಲವಿಕೆ, ಈ
ಭಾವಾಭಿನಯವೇ ಪ್ರಧಾನವಾದಂತಹ ನೃತ್ಯದ ಭಾಗವಿದು.
ಈ ತಿಲ್ಲಾನವು ಪಾರಸ್ -ರಾಗದಲ್ಲಿದ್ದು- ಆದಿತಾಳಕ್ಕೆ ಬಂದಿತವಾಗಿದೆ.
ಮಂಗಳಂ
– ನರ್ತಕಿಯು
ತನ್ನ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಎಲ್ಲರಿಗೂ,ಅಂದರೆ
ಮೊದಲು ಭಗವಂತನಿಗೆ, ನಂತರ ಗುರುಗಳಿಗೆ, ಸಂಗೀತ
ವಿದ್ವಾಂಸರಿಗೆ ಹಾಗೂ ಸಭಿಕರಿಗೆ ಮಂಗಳಂ ಮೂಲಕ
ವಂದನೆ ಸಲ್ಲಿಸಿದಳು. ಇದರೊಂದಿಗೆ ಕಾರ್ಯಕ್ರಮ
ಮುಕ್ತಾಯವಾಯಿತು.
ಈ
ನೃತ್ಯಗಾತಿಗೆ ಪಕ್ಕವಾದ್ಯ ಸಹಕಾರವನ್ನು ನೀಡಿದ ಕಲಾವಿದರು.
ನಟುವಾಂಗ
ಹಾಗೂ ಹಾಡುಗಾರಿಕೆ ನಾಗಭೂಷಣ್, ಮೃದಂಗ
– ವಿದ್ವಾನ್
ಬೆಟ್ಟ ವೆಂಕಟೇಶ್, ವಯಲಿನ್- ವಿದ್ವಾನ್ ಮಧುಸೂಧನ್, ಕೊಳಲು
– ವಿದ್ವಾನ್
ನರಸಿಂಹಮೂರ್ತಿ.
ಕಾರ್ಯಕ್ರಮದಲ್ಲಿ
ಖ್ಯಾತ ಪತ್ರಕರ್ತ "ಮುಳ್ಳಳ್ಳಿ ಸೂರಿ”, “ಶ್ರೀನಿವಾಸ್ ಜಿ.
ಕಪ್ಪಣ್ಣ , ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ, “ಎಸ್.
ಎಸ್. ಬಾವಿಕಟ್ಟೆ”, “ಹರಿಕುಮಾರ್” ವೇದಿಕೆಯನ್ನು ಹಂಚಿಕೊಂಡರು.
ಎಸ್. ನ೦ಜು೦ಡ ರಾವ್
No comments:
Post a Comment